Image 1 Image 2 Image 3 Image 4 Image 5 Image 5

ಕೊಠಾರಿ ಸಂಘಕ್ಕೆ ಸ್ವಾಗತ

ಪ್ರಾಮಾಣಿಕತೆ , ನಂಬಿಕೆ , ನಿಷ್ಠೆಯೇ ಜೀವಾಳ

ಸಂಘ ಸ್ಥಾಪನೆಯ ಹಿನ್ನೆಲೆ

ಜಾತಿ ಸಂಘಟನೆಯ ಉದ್ದೇಶವು ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಔದ್ಯೋಗಿಕ ಸಂಘಟನೆ ಮತ್ತು ಮಾಹಿತಿ ವಿನಿಮಯ, ಸಮಾಜದ ಆಶಕ್ತರಿಗೆ ನೆರವಾಗುವುದು, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಸಾಧನೆಯ ಹಾದಿಯಲ್ಲಿರುವವರಿಗೆ ಸಹಕಾರ ಮತ್ತು ಮಾರ್ಗದರ್ಶನ ನೀಡುವ ಉದ್ದೇಶ ಹೀಗೆ ಹತ್ತು ಹಲವು ಸಮುದಾಯದ ಅಭಿವೃದ್ಧಿಗೆ ಪೂರಕ ಕೆಲಸಗಳನ್ನು ನಿರ್ವಹಿಸಲು ಸಂಘಟನೆ ಅಗತ್ಯ.

ಸಮಾಜದಲ್ಲಿ ಸಂಘ ಶಕ್ತಿಯೇ ಮುಖ್ಯ, ಸಮಾಜದಲ್ಲಿ ವಿವಿಧ ಜಾತಿ ಮತದವರಿದ್ದಾರೆ, ಎಲ್ಲರೊಂದಿಗೂ ಸೌಹಾರ್ದಯುತವಾಗಿ ಬದುಕುವುದು ತುಂಬಾ ಅವಶ್ಯಕ. ನಮ್ಮ ಸಮಾಜದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿಗಳಿವೆ, ಕಡಿಮೆ ಸಂಖ್ಯೆ ಹೊಂದಿರುವ ಜಾತಿಗಳು ಇವೆ. ಸಂಖ್ಯಾಬಲ ಕಡಿಮೆ ಹೊಂದಿರುವ ಜಾತಿಗಳು ತಮ್ಮ ಅಸ್ತಿತ್ವಕ್ಕಾಗಿ ಸಂಘಟಿತರಾಗುವುದು ಅನಿವಾರ್ಯ ಈ ಹಿನ್ನೆಲೆಯಲ್ಲಿ ಕೊಠಾರಿ ಸಮಾಜದ ಸಂಘಟನೆಯ ಪರಿಕಲ್ಪನೆ ಮೂಡಿರುವುದು .

1993-94 ಕಾಲಘಟ್ಟ, ಕುಂದಾಪುರದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ವೀರಪ್ಪ ಮೊಯ್ಲಿಯವರು ಕೊರಗ ಸಮಾಜದ ಸಂಘಟನೆಯನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀ ಕೆ ನಾಗಪ್ಪ ಕೊಠಾರಿ ಕೆರಾಡಿ ಇವರಿಗೂ ಕೂಡ ನಮ್ಮ ಸಮಾಜದ ಸಂಘಟನೆ ಪರಿಕಲ್ಪನೆ ಮೂಡಿತು.

17-10-1999 ರಂದು ಶ್ರೀ ಕೆ ನಾಗಪ್ಪ ಕೊಠಾರಿ ಕೆರಾಡಿ ಇವರ ಮಾರ್ಗದರ್ಶನದಲ್ಲಿ ಶ್ರೀ ಶಂಕರ ಕೊಠಾರಿ ಯಡ್ತರೆ ಇವರ ಮುಂದಾಳತ್ವದಲ್ಲಿ ಹೋಟೆಲ್ ಶಿವ ಪ್ರಸಾದ್ ಕುಂದಾಪುರದಲ್ಲಿ ಸಭೆ ಸೇರಿ ಸಂಘ ಸ್ಥಾಪನೆಯ ನಿರ್ಣಯ ಕೈಗೊಳ್ಳ ಲಾಯಿತು.

ಈ ಸಭೆಗೆ ಕೆಳಕಂಡ ಮಹನೀಯರ ಉಪಸ್ಥಿತಿ ಇತ್ತು,

  • ಶ್ರೀ ಶಂಕರ ಕೊಠಾರಿ, ಯಡ್ತರೆ ಬೈಂದೂರು
  • ಶ್ರೀ ರಾಮ ಕೊಠಾರಿ, ಮಂದಾರ್ತಿ
  • ಶ್ರೀ ಕಾಳಿಂಗ ಕೊಠಾರಿ, ಮಂದಾರ್ತಿ
  • ಶ್ರೀ ಬಿ.ಶಿವರಾಮ ಕೊಠಾರಿ, ಹುದಾರರ ಮನೆ ಯಡ್ತರೆ
  • ಶ್ರೀ ರಘು ಕೊಠಾರಿ, ಯೆಳಜಿತ
  • ಶ್ರೀ ನಾಗಪ್ಪ ಕೊಠಾರಿ, ಕೆರಾಡಿ
  • ಶ್ರೀ ವಿ.ನಾಗು ಕೊಠಾರಿ, ಕೆರಾಡಿ
  • ಶ್ರೀ ಟಿ.ರಾಜೀವ್ ಹುದಾರ್, ತಗ್ಗರ್ಸೆ
  • ಶ್ರೀ ಕೆ.ಶಂಕರ ಕೊಠಾರಿ, ಕಂಚಾರು
  • ಶ್ರೀ ಮಹಾಬಲ ಕೊಠಾರಿ, ಕಮಲಶಿಲೆ
  • ಶ್ರೀ ಶಂಕರ ಕೊಠಾರಿ, ಅಂಪಾರು
  • ಶ್ರೀ ಹರಿಕೃಷ್ಣ ಕೊಠಾರಿ, ತೆಕ್ಕಟ್ಟೆ
  • ಶ್ರೀ ರಮಾನಾಥ ಕೊಠಾರಿ, ಕೋಟೇಶ್ವರ

21-11-1999 ರಂದು ಕುಂದಾಪುರದ ಹೋಟೆಲ್ ಹರಿಪ್ರಸಾದ್ ಸಭಾಂಗಣದಲ್ಲಿ "ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘ" ಎಂಬ ಹೆಸರಿನಲ್ಲಿ ಸಂಘದ ಉದ್ಘಾಟನೆಯಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಮಹಾಲಿಂಗ ಕೊಠಾರಿ, ತಲ್ಲೂರು ಇವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ದ.ಕ ಕೊಟ್ಟಾರಿ ಸಮಾಜ ಸುಧಾಕರರ ಸಂಘದ ಅಧ್ಯಕ್ಷರಾಗಿದ್ದ ಶ್ರೀ ಪುರುಷೋತ್ತಮ ಕೊಟ್ಟಾರಿಯವರು ಹಾಗು ಸಂಘದ ಪ್ರಮುಖರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಶ್ರೀ ಕೊರ್ಗು ಕೊಠಾರಿ ಆರ್ಡಿಯವರು ಅವಿರೋಧವಾಗಿ ಆಯ್ಕೆಯಾದರು, ಉಪಾಧ್ಯಕ್ಷರಾಗಿ ಶ್ರೀ ಮಹಾಲಿಂಗ ಕೊಠಾರಿ ತಲ್ಲೂರು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಮಾನಾಥ ಕೊಠಾರಿ ಕೋಟೇಶ್ವರ ಇವರು ಆಯ್ಕೆಗೊಂಡರು.

05-12-1999 ರಂದು ಸಂಘದ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು, ಸಂಘದ ತತ್ಕಾಲಿಕ ಕಛೇರಿಯನ್ನು ಶ್ರೀ ಗೋಪಾಲ ಕೊಠಾರಿ ಮೂಡ್ಲಕಟ್ಟೆ ಇವರ ಸಹಕಾರದಿಂದ ಅವರದೇ ಮಾಲೀಕತ್ವದ ಬೆನಕ ಎಂಟರ್ಪ್ರೈಸಸ್ ಕುಂದೇಶ್ವರ ರಸ್ತೆ, ಕುಂದಾಪುರ ಇಲ್ಲಿ ತೆರೆಯಲಾಯಿತು.

06-01-2002 ರಂದು ಸಂಘದ ಕಛೇರಿಯನ್ನು ಬೆನಕ ಎಂಟರ್ಪ್ರೈಸಸ್ ನಿಂದ ಕುಂದಾಪುರದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕಟ್ಟಡದ ಒಂದು ಕೋಣೆಯನ್ನು ರೂ 500/- ರ ಬಾಡಿಗೆ ಆಧಾರದಲ್ಲಿ ಪಡೆದು ಅಲ್ಲಿಗೆ ಸ್ಥಳಾಂತರಿಸಲಾಯಿತು. ಈ ಬಾಡಿಗೆ ಹಣವನ್ನು ಸಂಘದ ವಿವಿಧ ಪದಾಧಿಕಾರಿಗಳು ಪ್ರತೀ ತಿಂಗಳು ಒಬ್ಬೊಬ್ಬರಂತೆ ಭರಿಸುತ್ತಿದ್ದರು.

ಸಂಘದ ಧ್ಯೇಯ ಉದ್ದೇಶಗಳು

ವಿದ್ಯಾರ್ಥಿವೇತನ ವಿತರಣೆ: ವಿದ್ಯಾರ್ಥಿವೇತನದ ಉದ್ದೇಶವು ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಒದಗಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಹ ಕೊಡುವುದು ಸಂಘದ ಪ್ರಮುಖ ಉದ್ದೇಶಗಳಲ್ಲಿ ಒಂದು. ಸಂಘದ ಪ್ರಾರಂಭ ವರ್ಷದಿಂದಲೇ 8ನೇ ತರಗತಿಯಿಂದ ಪ್ರಾರಂಭಿಸಿ ಉನ್ನತ ಶಿಕ್ಷಣದವರೆಗಿನ ಸ್ವಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಇದನ್ನು ಮುಂದಿನ ಎಲ್ಲಾ ವರ್ಷಗಳಲ್ಲಿ ನಿರಂತರವಾಗಿ ಕೊಡಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ವಿದ್ಯಾನಿಧಿಯನ್ನು ಪ್ರಾರಂಭಿಸಲಾಗಿದೆ.
ಸಮಾಜದ ಸಾಧಕರನ್ನು ಪ್ರೋತ್ಸಾಹಿಸುವುದು: ಸಮಾಜದ ಸಾಧಕರನ್ನು ಪ್ರೋತ್ಸಾಹಿಸುವುದು ಸಮಾನತೆಯುಳ್ಳ ಪ್ರಗತಿಪರ ಸಮಾಜ ನಿರ್ಮಾಣಕ್ಕೆ ಮಹತ್ವದಾಗಿದೆ. ಅವರ ಪ್ರಯತ್ನಗಳನ್ನು ಗುರುತಿಸಿ ಮೆಚ್ಚುಗೆಯನ್ನು ನೀಡುವುದು. ಅವರ ಕಾರ್ಯಕ್ಷಮತೆಗೆ ಸಹಾಯವಾಗುವ ಅವಕಾಶಗಳನ್ನು ಕಲ್ಪಿಸುವುದು ಮತ್ತು ಸಮಾಜದ ಬೆಳವಣಿಗೆಗೆ ಅವರ ಕೊಡುಗೆಗಳನ್ನು ಮೆಚ್ಚುವುದು ಈ ಪ್ರೋತ್ಸಾಹದ ಭಾಗವಾಗಿರುತ್ತದೆ . ಈ ನಿಟ್ಟಿನಲ್ಲಿ ಸಂಘದ ಪ್ರಾರಂಭದ ವರ್ಷದಿಂದಲು ರಾಜಕೀಯ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ , ಧಾರ್ಮಿಕ ಕ್ಷೇತ್ರ, ಔದ್ಯೋಗಿಕ ಕ್ಷೇತ್ರ ಹಾಗು ಸಾಂಸ್ಕ್ರತಿಕ ಕ್ಷೇತ್ರಗಳಲ್ಲಿ ಉನ್ನತ ಸಾಧನೆಗೈದವರನ್ನು ನಿರಂತರ ಸನ್ಮಾನಿಸಿ ಪ್ರೋತ್ಸಾಹಿಸಿರುತ್ತೇವೆ.
ಸಮಾಜದ ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ: ಸಮಾಜದ ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುವುದು ಮಾನವೀಯತೆ ಮತ್ತು ಒಗ್ಗಟ್ಟು ಪ್ರದರ್ಶಿಸುವ ಮಹತ್ವದ ಕೆಲಸವಾಗಿದೆ. ಅವರಿಗೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ ಮತ್ತು ಮಾನಸಿಕ ಬೆಂಬಲ ನೀಡುವುದರಿಂದ ಅವರು ತಮ್ಮ ಆರೋಗ್ಯವನ್ನು ಪುನಃ ಪಡೆಯಲು ಸಹಾಯವಾಗುತ್ತದೆ. ಇದರಿಂದ ಸಮಾಜದಲ್ಲಿ ಸಹಾನುಭೂತಿ ಮತ್ತು ಪ್ರೀತಿ ಹೆಚ್ಚುತ್ತದೆ. ಇದನ್ನು ಮನಗಂಡು ನಮ್ಮ ಸಮಾಜದ ಕೆಲವು ವ್ಯಕ್ತಿಗಳು ತೀವೃವಾದ ಕಾಯಿಲೆಯಿಂದ ಬಳಲುತ್ತಿದ್ದಾಗ ಸೂಕ್ತ ಸಮಯದಲ್ಲಿ ಧನಸಹಾಯ ನೀಡಿ ಸಹಕರಿಸುತ್ತಿದ್ದೇವೆ.
ಯುವ ಸಂಘಟನೆ: ಯುವ ಸಂಘಟನೆ ಮೂಲಕ ಯುವಕರನ್ನು ಒಂದುಗೂಡಿಸಿ ಅವರ ಬೆಳವಣಿಗೆಗೆ ಮತ್ತು ಸಮಾಜ ಸೇವೆಗೆ ಬೇಕಾಗುವ ನಾಯಕತ್ವ ಗುಣಗಳನ್ನು ರೂಪಿಸುವುದು. ಈ ನಿಟ್ಟಿನಲ್ಲಿ ಯುವ ಸಂಘಟನೆ ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘ 05-09-2010 ರಲ್ಲಿ ಸ್ಥಾಪಿಸಲಾಯಿತು.
ಮಹಿಳಾ ಸಂಘಟನೆ: ಮಹಿಳೆಯರ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸುವ ಸಲುವಾಗಿ 05-09-2010 ರಂದು ಮಹಿಳಾ ಸಂಘಟನೆಯನ್ನು ಉದ್ಘಾಟನೆ ಮಾಡಲಾಯಿತು.